ಡಿ ವಿ ಗುಂಡಪ್ಪನವರ ಪರಿಚೆಯ – ಪ್ರಣತಿ ಪ್ರತಿಷ್ಟಾನದ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗು ಮಹನೀಯರ ಲೇಖನಗಳ ಸರಣಿ
ಭಾಗಾ 1
ಡಿ ವಿ ಗುಂಡಪ್ಪನವರ ಪರಿಚೆಯ

DVG
ಡಿವಿಜಿ ಎಂದೇ ಪ್ರಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು, ನುಡಿದಂತೆನಡೆಯುತ್ತಿದ್ದರು, ನಡೆದಂತೆ ನುಡಿಯುತ್ತಿದ್ದರು. ಹೀಗೆ ಹೇಳುವಿದಕ್ಕೆ ಅವರು ರಚಿಸಿದ“ಮಂಕುತಿಮ್ಮನ ಕಗ್ಗ“ ಹಾಗೂ ಅವರು ಸವೆಸಿದ ಜೀವನದಲ್ಲಿನ ಅವರ ನಡವಳಿಕೆಯೇ ಸಾಕ್ಷಿ.
ಕಗ್ಗ ಇರುವುದು, ಅದರ ಸತ್ವವನ್ನು/ ಸೂತ್ರವನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳಲು ಹಾಗೂಉತ್ತಮ ಜೀವನವನ್ನು ನಮ್ಮದನ್ನಾಗಿಸಿಕೊಳ್ಳಲು.ಇನ್ನೊಬ್ಬರಿಗೆ ಉಪದೇಶ ಮಾಡುವುದು ಸುಲಭ.ತನಗೇ ಆ ಪರಿಸ್ಥಿತಿ ಬಂದಾಗ, ಅದನ್ನು ಎದುರಿಸುವುದು ಕಷ್ಟ. ಆದರೆ ಗುಂಡಪ್ಪನವರು ಈ ಸ್ಥಿತಿಯನ್ನುಮೀರಿ ನಿಂತವರು. ಕವಿ ಕೆ.ಸಿ.ಶಿವಪ್ಪ ಅವರು ತಮ್ಮ ‘ಮುದ್ದುರಾಮನ ಮನಸು‘ಕೃತಿಯಲ್ಲಿ ಹೇಳಿದಂತೆಬದುಕಿ ಬಾಳಿದವರು ಡಿವಿಜಿ.
ಬರಿ ಮಾತು ಉಪದೇಶ ತಳವಿರದ ಕೊಡದಂತೆ | ಇನಿಗಾನ ಕೇಳ್ದಂತೆ ಸದ್ದು ಗದ್ದಲದಿ ||
ನಡೆದು ತೋರದ ರೀತಿ ಹೆಳವ ಗಿರಿ ಹಾಯ್ದಂತೆ | ನುಡಿಯಂತೆ ನಡೆಯಿರಲಿ – ಮುದ್ದುರಾಮ.
ಊಟದಲ್ಲಿ ಉಪ್ಪಿನಕಾಯಿ ಹೇಗೋ, ಬದುಕಿನಲ್ಲಿ ಉಪದೇಶ ಹಾಗೆ. ಉಪ್ಪಿನಕಾಯಿ ನಾಲಗೆಗೆ ರುಚಿ ಮಾತ್ರವಲ್ಲ, ಜೀರ್ಣಕಾರಿಯೂ ಹೌದು.ಉಪದೇಶವಾದರೂ ಹಾಗೆಯೇ; ಕಿವಿಗೆ ಮಾತ್ರ ಹಿತವಲ್ಲ; ಅದನ್ನು ಅರ್ಥ ಮಾಡಿಕೊಂಡು,ಆಡಿದ ಮಾತಿಗೆ ಅನುಗುಣವಾಗಿ ಬಾಳಿನಲ್ಲಿ ನಡೆದರೆ,ಬದುಕಿಗೆ ಪರಮಹಿತ.
“ಆದಿಕಾವ್ಯವೆನಿಸಿದ ಶ್ರೀಮದ್ರಾಮಾಯಣದಿಂದ ಹಿಡಿದು ಜಗತ್ತಿನ ಯಾವ ಮಹಾಕಾವ್ಯದ ಆಕಾಶವನ್ನು ನೋಡಿದರೂ, ಅದರಲ್ಲಿಉಪದೇಶಗಳೆಂಬ ಅನೇಕ ನಕ್ಷತ್ರಗಳು ಮಿನುಗುತ್ತ, ದಾರಿಯನ್ನು ತೋರಿಸುತ್ತಿವೆ”.ಆದರೆ ಪರೋಪದೇಶಪಾಂಡಿತ್ಯವಲ್ಲಈಕಗ್ಗ.
ಶಾಲೆಯಲ್ಲಿ ಕೇವಲ ಪ್ರೌಢಶಾಲೆಯವರೆಗೆ ಮಾತ್ರ ಓದಿದ್ದರೂ, ಸ್ವಂತ ವ್ಯಾಸಂಗದಿಂದ, ಯಾವ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಮಹಾ ಪ್ರಾಧ್ಯಾಪಕನೂ ಪಡೆದಿಲ್ಲದ ವಿದ್ಯಾ ಸಂಗ್ರಹ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಹಿಂದಿನ ಕಾಲದಲ್ಲಿ ನಮ್ಮಭಾರತೀಯ ಶಿಕ್ಷಣ ಪದ್ಧತಿ ಇದ್ದದ್ದು ಆ ಮಟ್ಟದ್ದು, ಹಾಗೆಯೇ ಹಿಂದೆ ಬೇಕಾದಷ್ಟು ಜನ ಮಹಾಮಹಿಮರು ಆಗಿ ಹೋದರು ಅಂಥಹ ಶಿಕ್ಷಣ ಪಡೆದು. ಒಟ್ಟಿನಲ್ಲಿ ಡಿವಿಜಿಯವರು, ಶಾಲೆಯ ನಾಲ್ಕು ಗೋಡೆಗಳ ಒಳಗಿನದಕ್ಕಿಂತ ಹೊರಗೇ ಕಲಿತದ್ದು ಹೆಚ್ಚು.
ಇವರು ರಚಿಸಿದ ಪುಸ್ತಕಗಳು ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಾಗಿದ್ದವು. ಇದಕ್ಕೆ ಕಾರಣ ಅವರಸ್ವಂತ ಅಧ್ಯಯನಮತ್ತು ಅಪಾರಜೀವನಾನುಭವ.ಅವರು ರಚಿಸಿರುವ ಕೃತಿಗಳು ಬಹಳಷ್ಟಿವೆ. ಅವುಗಳಲ್ಲಿ ಕೆಲವೆಂದರೆ–ನಿವೇದನ, ಉಮರನ ಒಸಗೆ, ಅಂತಃಪುರ ಗೀತೆಗಳು,ಪ್ರಹಸನ ತ್ರಯೀ, ಜ್ಞಾಪಕ ಚಿತ್ರ ಶಾಲೆ, ರಾಜ್ಯಾಂಗ ತತ್ತ್ವ, ಬಾಳಿಗೊಂದು ನಂಬಿಕೆ, ಶ್ರೀಮದ್ಭಗವದ್ಗೀತಾ ತಾತ್ಪರ್ಯ, ನಾಟಕಗಳು, ಋತ ಸತ್ಯಧರ್ಮ. ಪ್ರಸಿದ್ಧವಾಗಿರುವ ಇವರ”ಮಂಕುತಿಮ್ಮನ ಕಗ್ಗ” ಇಂದಿಗೂ ಜೀವಂತವಾಗಿ ಕನ್ನಡಿಗರ ಮನಸ್ಸಿನಲ್ಲಿರುವ ಕೃತಿ. ೧೯೪೩ ನೆಯ ಇಸವಿಯಲ್ಲಿಪ್ರಕಟವಾದ ಈ ಕೃತಿಎಂದೆಂದಿಗೂ ಎಲ್ಲ ದೇಶಕಾಲಗಳಿಗೂ ಅನ್ವಯಿಸುವ ಮೇರು ಕೃತಿ, ಅಂದರೆ ಸಾರ್ವಕಾಲಿಕ, ಸಾರ್ವದೇಶಿಕಎನ್ನುವುದರಲ್ಲಿಯಾರಿಗೂ ಯಾವುದೇ ತರಹದ ಸಂಶಯವಿಲ್ಲ.
ಡಿವಿಜಿಯವರು ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದರು. ಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ, ಸಮಾಜನೀತಿ, ಜೀವನ ಚರಿತ್ರೆ, ವ್ಯವಹಾರ ನೀತಿ, ರಾಜ್ಯಾಂಗ ಶಾಸನ ಮುಂತಾದವುಗಳು. ಅವರನ್ನು ಶಾಸನ ಸಭೆಯ ಪ್ರತಿನಿಧಿಯನ್ನಾಗಿ ನಮ್ಮ ಸರ್ಕಾರನಿಯೋಜಿಸಿತ್ತು. ಜಪಾನಿನಿಂದ ಜನ ಬಂದು ಇವರ ಸಲಹೆ ಕೇಳಿಕೊಂಡು ಹೋಗುತ್ತಿದ್ದರು.ಅವರ ತಿಳುವಳಿಕೆ ಮಟ್ಟ ಅಪಾರವಾದದ್ದು. ಅಷ್ಟೇ ಅಲ್ಲ,ಧರ್ಮ ಶಾಸ್ತ್ರ, ಆಧ್ಯಾತ್ಮ ವಿದ್ಯೆಗಳಲ್ಲಿಯೂ ಅವರ ಪರಿಶ್ರಮ ಗಣ್ಯವಾದದ್ದು.
ಡಿವಿಜಿ ಯವರು ಸ್ಥಿತಿವಂತರಲ್ಲದಿದ್ದರೂ ಹೃದಯ ಶ್ರೀಮಂತರು. ಡಿವಿಜಿ ಹೇಗೆ ಬದುಕಿ ಬಾಳಿದರು ಎನ್ನುವುದಕ್ಕೆ ಒಂದೆರಡುಘಟನೆಗಳನ್ನು ಇಲ್ಲಿ ಸ್ಮರಿಸಿಕೊಳ್ಳುವುದು ಉಚಿತ ಎನ್ನಿಸುತ್ತದೆ; ಡಿವಿಜಿ ಅವರನ್ನು ಸುಮ್ಮನೆ ಹಾಗೇ ಪದಗಳಲ್ಲಿ ಹಿಡಿದಿಡುವುದಕ್ಕಿಂತ, ಅವರದೇರಚನೆಯಾದ ಕಗ್ಗಗಳ ಮೂಲಕವೇ ಅವರನ್ನು ಪರಿಚಯಿಸಿದರೆ ಹೇಗೆ? ಇದೋ ಅದಕ್ಕೆ ತಕ್ಕ ಉದಾಹರಣೆ. ಮೊದಲನೆಯದಾಗಿ, ಜೀವನದ ಬಗ್ಗೆಅವರ ಅಭಿಮತ ಹೀಗಿತ್ತುಎಂಬುದನ್ನು ಒಂದು ನಡೆದ ಘಟನೆಯ ಮೂಲಕ ಸಾಬೀತು ಮಾಡಬಹುದು :-ಅವರು ಬದುಕಿದ್ದಾಗ ಅವರ ಬಗ್ಗೆಲೇಖನವನ್ನಾಗಲೀ, ಸಾಕ್ಷಚಿತ್ರವನ್ನಾಗಲೀ ಮಾಡಗೊಡುತ್ತಿರಲಿಲ್ಲ. ಹೆಸರಾಂತ ಸಾಹಿತಿ ಎಲ್.ಎಸ್.ಶೇಷಗಿರಿರಾಯರು ಬಂದು ಕೇಳಿದಾಗ ಕೂಡ–“ನನ್ನನ್ನು ಕೇಳದೆಯೇ ಮಾಡಿಕೊಳ್ಳುವ ಒಂದು ಕಾಲ ಬರುತ್ತೆ, ಅಲ್ಲಿಯವರೆಗೆ ನಿಮ್ಮಗಳ ಆಸೆಯನ್ನು ನಿಗ್ರಹ ಮಾಡಿಕೊಳ್ಳಿ ಎಂದಿದ್ದರು“.ಈಸೂತ್ರ ಕಗ್ಗದಲ್ಲಿ ಪ್ರಸ್ತಾಪಿತವಾಗಿದೆ –
ಆರಲೆನ್ನಯ ಹೃದಯ ಕರಣಗಳ ಕಾವುಗಳು | ಸೇರಲೆನ್ನಯ ಜೀವ ವಿಶ್ವಜೀವನದಲಿ ||
ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ | ಹಾರಯಿಸು ನೀನಿಂತು – ಮಂಕುತಿಮ್ಮ || 920
ನನ್ನ ಹೃದಯದ ಇಂದ್ರಿಯಗಳ ಬಿಸಿಯು ಆರಿ ತಣ್ಣಗಾಗಲಿ, ನನ್ನ ಜೀವವು ವಿಶ್ವದ ಜೀವರಾಶಿಗಳಲ್ಲಿ ಸೇರಿಹೋಗಲಿ. ಈ ಭೂಮಿತಾಯಿಯಮಡಿಲಲ್ಲಿ ನಾನು ಶಾಶ್ವತವಾಗಿ ನಿದ್ರಿಸುವಂತಾಗಲಿ. ನನ್ನನ್ನು ಈ ಜಗತ್ತು ಮರೆತಿರಲಿ. ಈ ರೀತಿಯಾಗಿ ನೀನು ಹಾರೈಸು.
ಇಷ್ಟೆಲ್ಲಾ ಇದ್ದರೂ ಡಿವಿಜಿ ಹೆಚ್ಚಿನ ಮಟ್ಟದ ಹಾಸ್ಯ ಪ್ರವೃತ್ತಿಯುಳ್ಳವರಾಗಿದ್ದರು, ಜೊತೆಗೆ ತಿಂಡಿಪೋತ ಕೂಡ. ಭೋಜನ ಭಾಗ್ಯಅವರದ್ದಾಗಿತ್ತು. ಭೋಜನ ಭಾಗ್ಯ ಎನ್ನುವುದು ಭಗವಂತ ಕೆಲವರಿಗೆ ಮಾತ್ರ ದಯಪಾಲಿಸಿರುವ ಒಂದು ಭಾಗ್ಯವೇ ಸರಿ. ಅಂಥ ಭಾಗ್ಯವಂತರಲ್ಲಿಡಿವಿಜಿ ಕೂಡ ಒಬ್ಬರು ಎನ್ನಬಹುದು. ಮಹಾಭಾರತದಂಥಹ ಸೊಗಸಾದ ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಭಾಗ್ಯಗಳನ್ನುಗುರುತಿಸಬಹುದು. ಅವೆಂದರೆ–
ಲಕ್ಷ್ಮೀ ಭಾಗ್ಯ, ಸರಸ್ವತೀ ಭಾಗ್ಯ , ಪುತ್ರ ಭಾಗ್ಯ , ಆರೋಗ್ಯ ಭಾಗ್ಯ, ಭೋಜನ ಭಾಗ್ಯ
ಇವೆಲ್ಲದರಲ್ಲಿ ಭೋಜನ ಭಾಗ್ಯ ಅತಿ ವಿಶಿಷ್ಟವಾದುದು. ಈ ಕುರಿತು ನಡೆದ ಒಂದು ಘಟನೆ ಹೀಗಿದೆ:- ಡಿವಿಜಿ ಮತ್ತು ವ್ಯಾಸಂಗ ಗೋಷ್ಠಿಯಯುವಮಿತ್ರರೊಡನೆ ದೇವರಾಯನದುರ್ಗಕ್ಕೆ ಕಾರಿನಲ್ಲಿ ಹೊರಟಾಗ, ಇನ್ನೇನು ತುಮಕೂರು ಬಂತು ಎನ್ನುವಾಗ ಕಾರಿಗೆ ಏನೋತೊಂದರೆಯಾಯಿತು. ಅದರ ರಿಪೇರಿಯಾಗುವವರೆಗೆ ಏನು ಮಾಡುವುದು ಎಂದು, ಅಲ್ಲೇ ಹತ್ತಿರದಲ್ಲಿದ್ದ ಪರಿಚಯಸ್ಥರ ಮನೆಗೆ ಇವರೆಲ್ಲಾಹೋದರು.ಜೊತೆಯಲ್ಲಿದ್ದ ಟಿ.ಎನ್ ಪದ್ಮನಾಭನ್ ಅವರಿಗೆ ಆ ಮನೆಯಲ್ಲಿ ಅದೇಕೋ ಸ್ವಲ್ಪ ಮುಜುಗರ. ಒಳ್ಳೆಯ ಕಾಫಿಯ ಆತಿಥ್ಯ ಕೂಡ ಆಯ್ತು.ಇನ್ನು ಹೊರಡೋಣವೇ? ಎಂದು ಟಿ.ಎನ್ ಪದ್ಮನಾಭನ್ಅವರು ಕೇಳಿದಾಗ, ಡಿವಿಜಿ ಎತ್ತರದ ದನಿಯಲ್ಲಿ(ದೊಡ್ಡ ಗಂಟಲು–ಅವರ ಮನೆಯೊಳಗಿನಪಿಸುಮಾತು ಕೂಡ ರಸ್ತೆಗೆ ಕೇಳಿಸುತ್ತೆ) – ನಾವುಗಳು ಮನೆಗೆ ಬರುವಾಗ ಮನೆಯಾಕೆ ಅವರೆಕಾಯಿ ಸುಲಿಯುತ್ತಿದ್ದರು. ಅವರು ಅವರೆಕಾಳು ಉಪ್ಪಿಟ್ಟುಮಾಡಿದ್ದರೆ ನಮ್ಮನ್ನು ಸತ್ಕರಿಸಿದ ಮನೆಯವರಿಗೆ ಬೇಜಾರಾಗುವುದಿಲ್ಲವೇ? ಎಂದರು.
ಆಗ ಸ್ನೇಹಿತರುಡಿವಿಜಿ ಅವರಿಗೆ, ನಿಮ್ಮದು ವಾಯು ಪ್ರಕೃತಿ, ಅದಲ್ಲದೆ ಅವರೆಕಾಳು ಒಳ್ಳೆಯದಲ್ಲ ಅಂದರು. ಆಗ ಡಿವಿಜಿ ಅದಿರ್ಲಿ,ಅವರೆಕಾಳು ಸೃಷ್ಟಿಸಿದ ಬ್ರಹ್ಮ ಶುಂಠಿ, ಮೆಣಸನ್ನೂ ಸೃಷ್ಟಿಸಿಲ್ಲವೇ ಅಂದ್ರು. ಅವರ ಪ್ರತೀಕ್ಷೆ ವ್ಯರ್ಥವಾಗಲಿಲ್ಲ. ಇರಲಿ, ಈ ಸನ್ನಿವೇಶಕ್ಕಾಗಿಯೋ ಏನೋಎಂಬಂತೆ, ಆ ಸಾಂಬಾರ ಪದಾರ್ಥಗಳನ್ನೆಲ್ಲಾ ಉಪಮೆಯ ತರಹ ಬಳಸಿಕೊಂಡು, ಬಾಳ್ಗೆ ಸಲುವ ತತ್ವವೊಂದನ್ನು ಜೊತೆಗೆ ಹೊಸೆದು ಕಗ್ಗದಪದ್ಯವೊಂದನ್ನು ರಚಿಸಿಟ್ಟಿದ್ದಾರೆ.
ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ | ಅನುವಪ್ಪುದೊಂದೊಂದು ರೋಗಕೊಂದೊಂದು ||
ನಿನಗಮಂತೆಯೆ ನೂರು ನೀತಿಸೂತ್ರಗಳಿರಲು | ಅನುವನರಿವುದೆ ಜಾಣು – ಮಂಕುತಿಮ್ಮ || ೯೩೫
ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆ ಇವುಗಳೆಲ್ಲವೂಒಂದೊಂದು ರೋಗಕ್ಕೆ ಗುಣಕಾರಿಗಳಾಗುತ್ತವೆ. ಹಾಗೆಯೇ ಜೀವನದಲ್ಲಿ ನೂರಾರುನಿಯಮಗಳಿದ್ದಾಗೆಯೂ, ನಿನಗೆ ಹೊಂದಿಕೆಯಾಗುವುದನ್ನು ತಿಳಿದುಕೊಳ್ಳುವುದೇ ಜಾಣತನ.
ಭೋಜನ ಭಾಗ್ಯ ಅಂದ್ರೆ ಇದು.ನೋಡಿ. ಡಿವಿಜಿ ಮೆಣಸು, ಹಿಪ್ಪಲಿಗಳ ಉದಾಹರಣೆಯನ್ನೇ ತೆಗೆದುಕೊಂಡು ಜೀವನಕ್ಕೆ ಬೇಕಾದಜಾಣತನವನ್ನೂ, ನಮ್ಮ ಚಿಂತನೆಗೆ ತಾಳೆಯಾಗುವ, ಮನಕ್ಕೊಪ್ಪುವ, ಅನ್ವಯಿಸಿಕೊಳ್ಳಬಹುದಾದ ಸೂತ್ರಗಳನ್ನು ಕೊಟ್ಟುಬಿಡುತ್ತಾರೆ.
– ಬಿ.ಎನ್.ಅಶೋಕ್ ಕುಮಾರ್
ಎಂಜೀನೀರ್ ISRO ಬೆಂಗಳೂರು